Saturday, June 23, 2012

ಮಾತ್ಗವಿತೆ-85

ಇತ್ತೀಚೆ ಬಯಕೆ ಹೆಚ್ಚಾಗುತ್ತಿವೆ ;
ಜನ ನಕ್ಕಾರು ಎಂಬ ಅಂಜಿಕೆಯೂ ಇದೆ !
ಕಣ್ಣಂಚಲಿ ಪುಟಿಸಿದ ಕರೆಯ ಒರತೆಗೆ
ಕಳವಳಿಸಿ, ನೆರೆತರೂ ಮರೆಯದನುಭಾವ !
ಬತ್ತದದು ; ಉಕ್ಕುತ್ತಲೇ ಇದೆ ;
ಮನಸು ಹೇಳುವ ಪಲ್ಲವಿ ;
ಕಾಲವೂ ಪಕ್ವವಾಗಿದೆ ; ತಡಬೇಡಿನ್ನು
ತುಡುಗಾದರೂ ಸರಿ ತಡುವು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.