Friday, June 15, 2012

ಮಾತ್ಗವಿತೆ-84

ಕಸ ಕಡ್ಡಿಗಳನ್ನೆಲ್ಲ ಆರಿಸಿ ತೆಗೆದು
ಹರಳುಗಳನ್ನು ಹೊರಚೆಲ್ಲಿ
ಅನ್ನ ಮಾಡುವ ತಿಳಿವು ಇರಬೇಕು !
ನೆನಪಿರಲಿ ಬರೀ ಅದಷ್ಟೇ ಅಲ್ಲ ;
ಪ್ರಮಾಣಬದ್ಧ ನೀರು ;
ಬೆಂಕಿಯ ಮರ್ಮವನ್ನೂ ತಿಳಿದಿರಬೇಕು !
ಬೆಂದರೆ ಅನ್ನ ; ಪರಮಾನ್ನ
ನೆನಪಿಡಿ
ಉಣ್ಣುವಾಗ ಹಸಿದವರ ನೆನಪೂ ಇರಲಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.