Tuesday, January 10, 2012

ಮಳೆಯೆಂದರೆ ಅದು ಬರೀ ಮಳೆಯಲ್ಲ !

ಮಳೆಯೆಂದರೆ ಬರೀ ಮಳೆಯಲ್ಲ !
ಬೆಳೆ ಹಾಳು ಮಾಡಬೇಕು !
ಕೋಟೆ ಕೊತ್ತಲುಗಳನ್ನು ಕೆಡುವಬೇಕು !
ಪಾಪ-ಪುಣ್ಯ, ಸ್ವರ್ಗ-ನರಕ, ದೇವರು-ದೆವ್ವ
ಪೂಜೆ-ಪೂಜಾರಿ, ಎಲ್ಲ ...
ಎಲ್ಲವನ್ನೂ ಕೊಚ್ಚಿಕೊಂಡು ಹೋಗಬೇಕು !
ಹೆಂಗಸು, ಗಂಡಸು, ಮಕ್ಕಳು, ಮುದುಕರೆನ್ನದೇ
ನೆಲ, ನಾಲೆ, ಗುಡ್ಡ, ಮಡ್ಡಿ, ಕಸ-ಕಡ್ಡಿ ಎನ್ನದೇ
ಎಲ್ಲವನ್ನೂ ಎಲ್ಲರನ್ನೂ ಸ್ವಾಹಾ ಮಾಡಬೇಕು !
ಜೀವ ಜಗತ್ತನ್ನು ಬಲಿ ತೆಗೆದುಕೊಳ್ಳಬೇಕು ಮಳೆ !
ಸುರಿಯಬೇಕು ಧೋ ಧೋ ಎಂದು !
ಎಲ್ಲವೂ ಕೊಚ್ಚಿಕೊಂಡು
ಭೂಮಿಯ ಮೇಲೆ ಏನೂ ಇಲ್ಲವಾದಾಗ
ಹೊಸ ಜೀವಿಗಳ ಉಗಮವಾಗಬೇಕು !
ಅಲ್ಲಿ ಮೇಲು ಕೀಳಿನ ತಿಳಿಗೇಡಿ
ತನಕ್ಕೆ ಅವಕಾಶ ಇರದು !
ಹಾಳುಮೂಳಗಳಿಗೆ ಮೂಲವಿರದು !
ಬದುಕು ಮಾತ್ರ ನಿರ್ಭೀತವಾಗಿರುತ್ತದೆ !
ಮನುಷ್ಯ ಮನುಷ್ಯನನ್ನು
ಮನುಷ್ಯನೆಂದೇ ಪರಿಗಣಿಸುತ್ತಾನೆ !
ಬಾಂಧವ್ಯಗಳ ಹೊಸ ಮನ್ವಂತರ 
ಆರಂಭವಾಗುತ್ತದೆ !

ಡಾ. ಸಿದ್ರಾಮ ಕಾರಣಿಕ
(ಮರಾಠಿ ಕವಿತೆಯೊಂದರ ಪ್ರಭಾವದಿಂದ)

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.