Saturday, January 07, 2012

ಮಾತ್ಗವಿತೆ-31

ಬಸವಿಳಿದ ಮೇಲೆ ಎದ್ದು ನಿಲ್ಲುವುದೇ
ಕಣ್ಣ ಕತ್ತಲೆಯ ಪರಸಂಗ !
ನಾಕ ನೋಡಲೂ ನೋವು !
ಸಾಕಾಗಿ ಹೋಯಿತು ಈ ಕರ್ಮ
ಅನ್ನೋದು ಗಳಿಗೆ ಮಾತ್ರ ;
ಮುಂದಿನದಕ್ಕೆ ಮತ್ತೇ ಹುಮ್ಮಸ್ಸು
ತುಂಬಿಕೊಳ್ಳುತ್ತದೆ ! ಬಲು ವಿಚಿತ್ರ
ಆದರೂ ಇದು ಖರೇ ಚಿತ್ರ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.