Wednesday, January 15, 2014

ಅಂಬೇಡ್ಕರ್ ಅವರ ಮೊಮ್ಮಕ್ಕಳ ಬ್ರಾಹ್ಮಣತ್ವ ಸ್ವೀಕಾರ ?

ಡಾ. ಬಾಬಾಸಾಹೇಬ ಅಂಬೇಡ್ಕರ್
ಡಾ. ಸಿದ್ರಾಮ ಕಾರಣಿಕ
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರಖರ ವೈಚಾರಿಕತೆಯ ಅರಿವು ಅವರ ಜೊತೆಗೆಯೇ ಹೋಯಿತೇನೋ ಎನಿಸುತ್ತದೆ. 'ಇಲ್ಲಿಯವರೆಗೆ ನಾನು ಎಳೆದು ತಂದಿರುವ ರಥವನ್ನು ಸಾಧ್ಯವಾದರೆ ಮುಂದಕ್ಕೆ ಒಯ್ಯಿರಿ. ಇಲ್ಲವಾದರೆ ಅದನ್ನು ಅಲ್ಲಿಯೇ ಬಿಟ್ಟು ಬಿಡಿ. ಆದರೆ ದಯವಿಟ್ಟು ಹಿಂದಕ್ಕೆ ಮಾತ್ರ ತಳ್ಳಬೇಡಿ' ಎಂಬ ವಿಚಾರ ಕೇವಲ ವೇದಿಕೆಯ ಮಾತಾಗಿ ಇಂದು ಉಳಿದುಕೊಂಡಿದೆಯೇನೋ ಎಂಬ ಆತಂಕ ಕಾಡುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಬೆಳೆದ ಎಷ್ಟೋ ಮಂದಿ ಇಂದು ಆ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಬೇರೆಯವರು ಯಾಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮೊಮ್ಮಕ್ಕಳೇ ಇಂದು ಬ್ರಾಹ್ಮಣತ್ವವನ್ನು ಪೋಷಿಸುತ್ತಿದ್ದಾರೆ. ದೇವಾಲಯಗಳಲ್ಲಿ ಹೋಮ-ಹವನ, ಪೂಜೆ ಮಾಡುವುದಷ್ಟೇ ಅಲ್ಲ ; 'ರಾಜಗೃಹ'ದಲ್ಲೂ ಆ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಮನಸ್ಸು ಸಂತಾಪಿತಗೊಳ್ಳುತ್ತಿದೆ.
 
ಇಂಥ ಸಂಗತಿಗಳನ್ನು ಖಂಡಿಸಲೇ ಬೇಕಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿ ಬೇಡವಾಗಿದ್ದರೆ ಅವರ ಹೆಸರನ್ನೂ ಬಳಸಿಕೊಳ್ಳುವ ಅವಶ್ಯಕತೆಯಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.