Monday, October 21, 2013

ವಚನ-32

ಹೊಸದರ ಪದರ ಹರಿಯುವುದಷ್ಟೇ 
ಅಲ್ಲ ಬದುಕು ಹಳೆಯದರ ಅನುಭವಗಳ 
ಮುದುಡಿದ ತಾವರೆಯನ್ನೂ ಅರಳಿಸಬೇಕು !
ಮೆಟ್ಟಿ ನಿಲ್ಲುವವರಿಗೆ ಮೆಟ್ಟು ತೋರಿಸಬೇಕಿದೆ 
ಅರಿವಿನ ಪರದೆ ಹರಿದೊಗೆದು ಹೊರಬರಬೇಕು ;
ಬರಬೇಕು ; ಬರ ಇರದೇ ಬರಬೇಕು ;
ಹಾದಿಗೆ ಅಡುಗಾಲು ಗರಿಮೆಯವರ ನಿಲುಮೆ
ಹರಿದೊಗೆಯಬೇಕು ಕಾರಣಿಕ ಸಿದ್ಧರಾಮ
ಗತದ ಬೆಂಕಿಗೆ ಪಾತರಗಿತ್ತಿ ಸುಡಲಿ ಬಿಡು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.