Friday, October 25, 2013

ಮಾತ್ಗವಿತೆ-154

ಹಿಡಿದು ಇನ್ನೇನು ಬಿಡಬೇಕು ಎನ್ನುವಾಗ
ಬೀಜ ಮೊಳೆತೀತು ಎನ್ನುವ ಡಂಭ ಎಲ್ಲಿತ್ತೋ ?
ಯಾಕಾದರೂ ಬಂದಿತ್ತೋ ? ಯಾವ ಹಾದಿಯ ತೋರುತ್ತಿತ್ತೋ ?
ಘಾಸಿಘಾತಕ್ಕೆ ಸಾಂತ್ವನದ ಬೆಡಗು ಬೇಕಿಲ್ಲ ;
ಬಯಸಿದ್ದೇ ಸಿಗಲಿಲ್ಲ ; ಹಿಡಿಯಲಿಲ್ಲ ; ಹಿಡಿಯಲು ಬಿಡಲಿಲ್ಲ
ಎನ್ನುವುದು ಒಂದು ಅಗ್ಗಳಿಕೆ ಎನ್ನಲೆ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.