Tuesday, September 03, 2013

ಬೆಳಗಾವಿಯ ದಲಿತ ಸಂಘಟನೆಗಳಿಗೆ, ದಲಿತ ಪಕ್ಷಗಳಿಗೆ ನನ್ನ ಧಿಕ್ಕಾರ !

 
ಬೆಳಗಾವಿಯ ದಲಿತ ಬಂಧುಗಳು ಮಾಡುವ ಕಿತಾಪತಿ ಇದು !
---------------------------------------------------------------

ಸಾಮಾಜಿಕ ನ್ಯಾಯದಡಿ ಕೆಲಸ ಮಾಡುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಬಿ.ಆರ್‌. ಅನಂತನ್ಅವರ ವಿರುದ್ಧ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲ ಸಲ್ಲದ ಆರೋಪ ಮಾಡಿ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಹಾಗೂ ಆರ್ಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಮಂಗಳವಾರ ವಿಟಿಯು ಆವರಣದಲ್ಲಿ ಪ್ರತಿಭಟನೆ ನಡೆಸಿದ ಾರ್ಯಕರ್ತರು, ವಿಟಿಯು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು
ಆರ್ಪಿಐ ಮತ್ತು ದಲಿತ ಮುಖಂಡರು ಮಾತನಾಡಿ, ಕುಲಪತಿ ಅನಂತನ್ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕೆಲಸ ಮಾಡಿ ವಿಶ್ವವಿದ್ಯಾಲಯವನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ. ವಿವಿಯಲ್ಲಿ ನಡೆಯುತ್ತಿರುವ ನೇಮಕಾತಿಯನ್ನು ಅತ್ಯಂತ ಪಾರದರ್ಶಕವಾಗಿ ಮಾಡುತ್ತಿದ್ದಾರೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಅವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಸರಕಾರ ಅವರ ವಿರುದ್ಧ ಬರುತ್ತಿರುವ ಆರೋಪಗಳಿಗೆ ಕಿವಿಗೊಡದೆ ಅವರಿಗೆ ಮುಕ್ತವಾಗಿ ಕೆಲಸ ಮಾಡುವ ವಾತಾವರಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ದೇಶಪಾಂಡೆ, ಸರಕಾರ ಕೇವಲ ನಿರಾಧಾರ ಆರೋಪಗಳಿಂದ ಯಾರ ವಿರುದ್ಧ ಕ್ರಮ ಜರುಗಿಸುವುದಿಲ್ಲ. ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲರ ಹಿತ ಕಾಪಾಡುತ್ತದೆ ಎಂದು ಭರವಸೆ ನೀಡಿದರು. (ಉದಯವಾಣಿ ಸುದ್ದಿ : 19/06/2013)
*******************
ಸುದ್ದಿಯನ್ನು ಯಾರಾದರೂ ನಂಬುತ್ತೀರಾ ? ರಾಣಿ ಚೆನ್ನಮ್ಮ ವಿ.ವಿ. ಹಗರಣಗಳು ಎಲ್ಲರಿಗೂ ಗೊತ್ತು ; ಆದರೆ ಯಾರೂ ಬಗ್ಗೆ ಚಕಾರ ಎತ್ತುತ್ತಿಲ್ಲ. ಅದನ್ನು ಈಗ ನಾನು ಆರಂಭ ಮಾಡುತ್ತಿದ್ದೇನೆ. ಕುಲಪತಿ ಅನಂತನ್ ಅವರನ್ನು ಹೊಗಳಿದ ಕೆಲ ದಲಿತ ಸಂಘಟನೆಗಳಿಗೆ, ಆರ್.ಪಿ.. ದಂತಹ ದಲಿತ ಪಕ್ಷಗಳಿಗೆ ನನ್ನ ಧಿಕ್ಕಾರ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.