Tuesday, June 04, 2013

ಕುಡಿಯೊಡೆಯಲು ತೊಡೆ ಬೇಕಲ್ಲ !

ಡಾ. ಸಿದ್ರಾಮ ಕಾರಣಿಕ 
ತೊಡೆಯ ಮೇಲಿನ ಚಿತ್ತಾರ
ಕತ್ತಲು ಕವಿದಾಗಲೂ ಕಂಡ ಸೋಜಿಗ !
ಅದೇನು ಚಿತ್ತಾರವೋ  ಹಸೆಯೋ ?

ಹಸಿದುಕೊಂಡಾತಂಗೆ ಸಮಯವಿಲ್ಲ !
ಸರಸ ವಿರಸದ ಸಲ್ಲಾಪವಿಲ್ಲ
ಬರೀ ಚರ್ಮಕ್ಕೆ ಚರ್ಮ ಅಂಟುವ
ಚರಮಭಾವದ ನರಮಾನುಸ !
ಕರೆಯ ಸಾಕರಿಸಿ  ನಾಚುವ
ಬರೀ ಮೈಗೆ ಅಂಟಿದ ಚರ್ಮ !
ಗುರಿ ಇಲ್ಲದ ಬದುಕು ಅಲ್ಲ ; ಇದೆ
ಮಳೆ ಹನಿಯುವಾಗ ಬಿತ್ತಬೇಕಲ್ಲ !
ಬೀಜಕ್ಕೆ ಬೆಳೆ ಬಯಸುವಿಕೆ ಸಹಜ
ಕುಡಿಯೊಡೆಯಲು ತೊಡೆ ಬೇಕಲ್ಲ !


No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.