Sunday, June 30, 2013

ವಚನ-29

ತೊಡೆಯೇರಿದ ತಾಂಬೂಲದ ಹೆಣ್ಣು
ಕಣ್ಣು ಕತ್ತಲು ಬರುವಷ್ಟು ರಸ ಹೀರಿದ ರಭಸಕ್ಕೆ
ಕಸಿವಿಸಿಗೊಳ್ಳುವ ಸರದಿಯಲ್ಲಿದ್ದೂ ಸರಸದ ಬಯಕೆ
ಪುಟಿನಗೆಯುವಿಕೆಗೆ ಬರೀ ದೇಹ ಕಾರಣವಲ್ಲ
ಕಾರಣಿಕ ಸಿದ್ಧರಾಮ ಅಲ್ಲಿದೆ ಬಯಸದೇ ಬಂದ ಬಂಧವೂ
ದೆಸೆ ದೆಸೆಗೆ ತಡವಿ ಮಾಯಾಮೃಗದ ಹಸಿತನ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.