Thursday, November 08, 2012

ಡಾ. ಅಂಬೇಡ್ಕರ್ ಬರೆಯುವ ಮೊದಲೇ ಭಾರತಕ್ಕೆ ಒಂದು ಸಂವಿಧಾನ ರಚನೆಯಾಗಿತ್ತು. ಆದರೆ ...?



ಸುರೇಂದ್ರ ಉಗಾರೆ, ವಕೀಲರು, ರಾಯಬಾಗ (ಬೆಳಗಾವಿ)
               
ಭಾರತ 1947ರಲ್ಲಿ ಸ್ವತಂತ್ರವಾಯಿತಾದರೂ  1950ರಲ್ಲಿ ಸಂವಿಧಾನ ಜಾರಿಯಲ್ಲಿ ಬಂದಿತ್ತು. ಈ ಸಂವಿಧಾನ ಡಾ// ಅಂಬೇಡ್ಕರ ಮುಖಂಡತ್ವದಲ್ಲಿ ರಚನೆಯಾಗಿರುವ ವಿಷಯ ಭಾರತೀಯರಿಗೆಲ್ಲ ಗೊತ್ತಿದೆ. ಪ್ರಸ್ತುತ ದಿನಗಳಲ್ಲಿ ಸಂವಿಧಾನ ತಿದ್ದುಪಡಿ ವಿಷಯಕ್ಕೆ ಕೈ ಹಾಕಿ ದಲಿತರ ವಿರೋದಿ ಕಟ್ಟಿಕೊಂಡವರು ಅನೇಕರು ಇದ್ದಾರೆ. ಯಾವ ವಿಷಯಕ್ಕಾಗಿ ತಿದ್ದುಪಡಿ ? ಅಥವಾ ದಲಿತನೊಬ್ಬನಿಂದ ರಚಿತವಾಗಿದೆ ಎಂಬ ಕಾರಣಕ್ಕಾಗಿಯೇ ? ಇಂತಹ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಸಂವಿಧಾನ ತಿದ್ದುಪಡಿಮಾಡಲು ಹೊರಟಿರುವ ಗಣ್ಯಮಾನ್ಯರೆ, ಭಾರತದ  ಇತಿಹಾಸದ ಪುಟಗಳನ್ನು ತೆಗೆದು ಓದಿರಿ. ಡಾ// ಅಂಬೇಡ್ಕರಗಿಂತ  20 ವರ್ಷಗಳ ಮೊದಲೇ ಭಾರತಕ್ಕೊಂದು ಸಂವಿಧಾನ ರಚನೆಯಾಗಿತ್ತು. ಆದರೆ, ಸಿಖ್ ರ ಹಾಗೂ ಮುಸ್ಲಿಂರ ವಿರೋದಿಂದ ದು ಹುಟ್ಟಿದ ದಿನವೆ ಮಣ್ಣು ಮಾಡುವ ಪ್ರಸಂಗ ಬಂದಿತ್ತು. ಸಂವಿಧಾನ ರಚನೆ ಮಾಡಲು ಹೋಗಿ ಕೋಮಿನ ಪಟ್ಟ ಕಟ್ಟಿಕೊಂಡು ಸಂವಿಧಾನ ಎಂಬ ಪದ ಬಿಟ್ಟು ವರದಿ ಎಂಬ ಸಂವಿಧಾನವನ್ನು ತಯಾರಿಸಿ ಹೆಸರು ಕೆಡಿಸಿಕೊಂಡ ಪುಣ್ಯಾತ್ಮನ ಇತಿಹಾಸ ನಿಮಗೆ ಗೊತ್ತಿದೆಯೇ ?  ಆ ಪುಣ್ಯಾತ್ಮನೇ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ತಂದೆ ಮೋತಿಲಾಲ ನೆಹರು !
ಇಂಗ್ಲೆಂಡ ಸರಕಾರ ಭಾರತೀಯರಿಗೆ ಅವರ ಬೇಡಿಕೆಗೆ ಅನುಗುಣವಾಗಿ 1919ರಲ್ಲಿ ಮಂಟೆಗೊ ಜೇಮ್ಸ ಪೊರ್ಡ ಎಂಬ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾಯ್ದೆ ಭಾರತೀಯರಿಗೆ ತೃಪ್ತಿ ನೀಡಲ್ಲಿಲ್ಲ, ನಿರಾಸೆಗೊಂಡ ಭಾರತೀಯರು ಸ್ವತಂತ್ರ ಚಳುವಳಿಯನ್ನು ತೀವ್ರಗೊಳಿಸಿದರು. ಆದರು ಬ್ರಿಟಿಷರು 1919ರ ಕಾಯ್ದೆಯ ವಿಫಲತೆಯನ್ನು ತಿಳಿಯಲು ಮತ್ತು ಭಾರತಿಯರ ಆಸೆಗೆ ಸ್ಪಂದಿಸಲು ಇಂಗ್ಲೆಂಡಿನಲ್ಲಿ ಸೈಮನ್ ಮುಖಂಡತ್ವದಲ್ಲಿ ಒಂದು ಆಯೋಗವನ್ನು ರಚಿಸಿತು. ಈ ಆಯೋಗದಲ್ಲಿ ಏಳೂ ಜನ ಬಿಳಿಯರು ಇದ್ದುದ್ದರಿಂದ ಭಾರತೀಯ ಸ್ವತಂತ್ರ ಹೋರಾಟಗಾರರು ಈ ಆಯೋಗವನ್ನು ವಿರೋಧಿಸಿದರು ಮತ್ತು ಆಯೋಗ ಭಾರತಕ್ಕೆ ಬಂದರೆ ಭಾರತದ ತುಂಬ ಪ್ರತಿಭಟನೆ ಮಾಡುವುದಾಗಿ ಬ್ರಿಟಿಷರನ್ನು ಎಚ್ಚರಿಸಿದ್ದರು. ಅವಾಗ ಭಾರತದ ಇಂಗ್ಲೆಂಡಿನ ಕಾರ್ಯದರ್ಶಿಯಾಗಿದ್ದ ಲಾರ್ಡ ಬರ್ಕೆನ ಹೆಡ್ 1925 ಜುಲೈ 7ರಂದು ಭಾರತೀಯರು ತಮ್ಮ ಬೃಹತ್ ದೇಶಕ್ಕೆ ತಾವೇ ಸಂವಿಧಾನ ರಚಿಸುವುದಾದರೆ ರಚಿಸಲಿ ಎಂದು ಭಾರತೀಯರಿಗೆ ಸವಾಲು ಹಾಕಿದ್ದನು !
ಭಾರತದ ಕಾರ್ಯದರ್ಶಿಯ ಸವಾಲನ್ನು ಎದುರಿಸಲು ಮತ್ತು ಭಾರತೀಯರಿಗೆ ಸಂವಿಧಾನ ರಚಿಸುವ ಸಾಮರ್ಥ್ಯವಿದೆ ಎಂದು ತೋರಿಸುವ ಸಲುವಾಗಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ 1928ರಲ್ಲಿ ಬಾಂಬೆಯಲ್ಲಿ ಮೋತಿಲಾಲ್ ನೆಹರೂ ಮುಖಂಡತ್ವದಲ್ಲಿ ಸಮಿತಿಯೊಂದನ್ನು ರಚಿಸಿತು, ಈ ಸಮಿತಿಯಲ್ಲಿ 10 ಜನ ಸದಸ್ಯರಿದ್ದರು ಇವರಲ್ಲಿ ಮುಸ್ಲಿಂ ಮತ್ತು ಸಿಖರು ಇದ್ದರು ಹಾಗೂ ಪಂಡಿತ ಜವಾಹರಲಾಲ ನೆಹರೂರವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಭಾರತೀಯರಿಗೆ ತಕ್ಕಂತಹ ಸಂವಿಧಾನ ರಚನೆ ಕಾರ್ಯ ಭರದಿಂದ ಸಾಗಿತ್ತು. ನಂತರ ಡಿಸೆಂಬರ[1928] ತಿಂಗಳಲ್ಲಿ ಕಲ್ಕತ್ತಾದ ಅಧಿವೇಶನದಲ್ಲಿ ಮೋತಿಲಾಲ್ ನೆಹರೂರವರು ಕೋಮಿಗೆ ಸಂಬಂಧಿಸಿದಂತೆ ಭಾಷಣ ಮಾಡಿದರು. ಅದೇ ಅಧಿವೇಶನದಲ್ಲಿ ಸಿಖರು, ಮುಸ್ಲಿಂರು ಮೋತಿಲಾಲರ ಭಾಷಣ ವಿರೋಧಿಸಿ ಸಂವಿಧಾನ ಜಾರಿಯಾಗದಂತೆ ಪ್ರತಿಭಟಿಸಲು ತಯಾರಿ ನಡೆಸಿದರು. ಕೊನೆಗೆ, ಇಂತಹ ವಿರೋದ ನಡುವೆಯೇ ಲಾಹೋರ ಅಧೀವೇಶನದಲ್ಲಿ ಆಯೋಗ ತಯಾರಿಸಿದ ಸಂವಿಧಾನವನ್ನು ಅಂಗೀಕರಿಸಿದರು. ಈ ಅಂಗೀಕಾರದ ವಿರುದ್ದ ಸಿಖ್ ಜನಾಂಗದವರು, ಕಾಂಗ್ರೆಸಿನ ಮುಸ್ಲಿಂರು ಹಾಗೂ ಮಹಮದ್ ಅಲಿ ಜಿನ್ನಾ ಮೊದಲಾದವರ ವಿರೋಧದಿಂದಾಗಿ 14 ಅಂಶಗಳ ಸಂವಿಧಾನದಲ್ಲಿ ಸೇರಪಡೆ ಪಟ್ಟಿಯಿಂದಾಗಿ  ಮೋತಿಲಾಲ ನೆಹರೂರವರು ತಯಾರಿಸಿದ ಸಂವಿಧಾನ ಅಂಗೀಕರಿಸಿದ ದಿನವೇ ಮಣ್ಣು ಕೊಡಬೇಕಾಯಿತು !
ಹೀಗೆ ಭಾರತದ ಇತಿಹಾಸದಲ್ಲಿ ಭಾರತೀಯರ ಆಸೆಗಳಿಗೆ ಅನುಗುಣವಾಗಿ ಸಂವಿಧಾನ ಬರೆಯಲು ಹೋಗಿ, ಕೋಮುಗಳನ್ನು ಸೃಷ್ಟಿಸುವವರೇ ಆಗಿದ್ದಾರೆ. ಇಂತಹವರು ಸಂವಿಧಾನ ಬರೆಯಲು ಅರ್ಹರೆ ಒಂದೇ ಒಂದು ಸಲ ಯೋಚಿಸಿ.  ಇತಿಹಾಸದಲ್ಲಿ ಮೋತಿಲಾಲ ನೆಹರು ಬರೆದಿರುವ ಸಂವಿಧಾನವನ್ನು  'ನೆಹರೂ ವರದಿ' ಎಂದು ಕರೆಯುತ್ತಾರೆ !  ಅಷ್ಟಕ್ಕೂ ಡಾ// ಅಂಬೇಡ್ಕರ ಕರಡು ರಚನಾ ಸಮಿತಿಯ ಅಧ್ಯಕ್ಷರು, ಇವರ ಜೊತೆ ಎಲ್ಲಾ ಜಾತಿಯ ಸದಸ್ಯರಿದ್ದರು. ಸಂವಿಧಾನ ಜಾರಿಯಾಗುವ ಸಮಯದಲ್ಲಿ ಯಾರೊಬ್ಬರೂ ತುಟಿ ಬಿಚ್ಚಲಿಲ್ಲ, ಕರಡು ರಚನೆ ಮಾಡುವುದು ಡಾ// ಅಂಬೇಡ್ಕರವರಿಂದ ಮಾತ್ರ ಸಾಧ್ಯ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಪಂಡಿತ ಜವಾಹರಲಾಲ ನೆಹರೂ ಕೂಡಾ ಸಂವಿಧಾನ ಬರೆಯುವ ಸಾಮರ್ಥ್ಯ ಇತ್ತು ಎಂದಾದರೆ ಸಂವಿಧಾನ ಬರೆಯಲಿಲ್ಲ ಏಕೆ ? ಅಪ್ಪ ಮೋತಿಲಾಲ ನೆಹರೂ ಸಿಖ್ ವಿರೋಟ್ಟಿಕೊಂಡು ಸಂವಿಧಾನ ಶಿಲ್ಪಿ ಎಂಬ ಪಟ್ಟ ಕಳೆದುಕೊಂಡರೆ, ಮಗ ಜವಾಹರ ಲಾಲ ನೆಹರೂ ಇಂಗ್ಲೆಂಡಿನ ಔತಣ ಕೂಟದಲ್ಲಿ ತನ್ನಷ್ಟಕ್ಕೆ ತಾನೇ ಕುಳಿತಿದ್ದ ಜಿನ್ನಾನನ್ನು ಕೆಣಕಿ ಪಾಕೀಸ್ತಾನದ ರಚನೆಗೆ ಕಾರಣನಾದ ಇತಿಹಾಸವಿದೆ ! ಇಂತಹ ನಾಯಕರು ಸಂವಿಧಾನ ಬರೆದರೆ ಹೇಗಿರುತ್ತೆ ಎನ್ನುವ ಕಲ್ಪನೆ ಮಾಡಲು ಸಾಧ್ಯವೆ ? ಸಾಮರ್ಥ್ಯದ ಜೊತೆ ಹೊಂದಾಣಿಕೆಯು ಇರಬೇಕು. ಈ ಗುಣ ಜವಾಹರಲಾಲ ನೆಹರೂಗೆ ಇರಲಿಲ್ಲ. ನೆಹರೂ ಸಂವಿಧಾನ ಬರೆಯದಿದ್ದರೇನು ಲಾಹೋರ ಅಧಿವೇಶದಲ್ಲಿ ತಂದೆ ಮೋತಿಲಾಲ ಬರೆದ ಸಂವಿಧಾನದ ಅಂಗೀಕಾರದ ದಿನದ ನೆನಪಿಗಾಗಿ ಜನೇವರಿ 26ರಂದು ಈಗಿನ ಸಂವಿಧಾನವನ್ನು ಅಂಗೀಕರಿಸಲಾಯಿತಲ್ಲವೆ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.