Thursday, November 08, 2012

ಪ್ರಳಯವಾಗಲೇ ಬೇಕು !

ನಾಗೇಶ್ ಶಿವಶರಣ 
ಭ್ರಷ್ಟರ, ಧರ್ಮಾಂರ, ಕೊಲೆಪಾತಕಿಗಳ
ಸರ್ವನಾಶಕೇ
ಪ್ರಳಯವಾಗಲೇ ಬೇಕು  !
ಬೆಟ್ಟ ಗುಡ್ಡಗಳೇ ಬಾಯ್ತರೆಯಿರಿ
ಎಲ್ಲರ ಒಳನುಂಗಲು
ಜ್ವಾಲೆಯನೂದು ಭೂವಿಯೇ
ಎಲ್ಲರೆದೆಯ ಗಡ ಗಡ ನಡುಗಿಸಲು !

ಜಾತಿ ಧರ್ಮಗಳೆಲ್ಲ ಸುಟ್ಟು ಹೋಗಲಿ
ದೇವರುದಿಂಡಿರುಗಳ ಶವದ ಪೆಟ್ಟಿಗೆ ಕಟ್ಟಲಿ
ದಿಗ್ಗ ದಿಗಂತವ ನಡುಗಲಿ
ಈ ಜಗಕೆ ಪ್ರಳಯವಾಗಲಿ !

ಓ ಮಿಂಚು, ಗುಡುಗು, ಸಿಡಿಲುಗಳೇ ಸಿಡಿದೆದ್ದು ಬನ್ನಿ
ಭ್ರಷ್ಟರ ಸುಟ್ಟು, ಶಿಷ್ಟರ ಉಳಿಸಲು
ಚಂಡಮಾರುತಗಳೇ ನುಗ್ಗಿ ಬಿಡಿ
ನವಯುಗವ ಬೆಳೆಸಲು !

ಎಲ್ಲವೂ ಸರ್ವನಾಶವಾಗಲಿ
ಸತ್ಪುರ್ಶರು ಜನನಗೆಯಲಿ
ಅದಕೇ ಪ್ರಳಯವಾಗಲಿ
ಮಾನವಧರ್ಮ ಚಿಗುರಲಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.