Wednesday, February 22, 2012

ಬಸವಣ್ಣನ ಹೆಸರನ್ನು ಹೇಳಲು ನಾಚಿಕೆಯಾಗಬೇಕು ,,,,,,

ಯಾರದೋ ಜಯಂತಿ ; 
ಮಾಡುತ್ತೇವೆ ಅದ್ದೂರಿ !
ಯಾವುದೋ ಹಬ್ಬ 
ಮಾಡುತ್ತೇವೆ ಅದ್ದೂರಿ !
ಮನುಷ್ಯನನ್ನು ಮನುಷ್ಯನನ್ನಾಗಿ 
ಅರಿಯುವ
ಹಬ್ಬವೇನಾದರೂ ಇದೆಯಾ 
ಎಂದರೆ ..... ಉತ್ತರಗಳೆಲ್ಲ ಸ್ತಬ್ದ !
ಕೆಲವು ಬಂಕೆ ಮೆತ್ತಿಸಿಕೊಂಡಿವೆ.
ಕೆಲವು ಬಂಕೆಯನ್ನು ಮೀರಿ ಬಸಿರಾಗುತ್ತಿವೆ ;
ಕೆಲವಂತೂ ಇನ್ನೂ ಬಂಜೆಯಾಗಿಯೇ ಉಳಿದಿವೆ !
ಗುಂಜಿಯಾದರೂ ಯೋಚನೆ ಬೇಡ !
ಯೋಚನೆ ಏನು ಬಂತು ಹಂಡೆ ತುಂಬಿದೆ ;
ಆದರೆ
ನುಡಿದಂತೆ ನಡೆಯುವ 
ಹಠ-ಛಲ-ಖುಷಿ ಹೋಗಲಿ ಬಿಡಿ
ಬಿಸಿಯಾದರೂ ಇದೆಯೇ ?
ಜಗತ್ತಿಗೆ ಗುರುವಾಗಬೇಕಿದ್ದ 
ಬಸವಣ್ಣನನ್ನು ಎತ್ತಾಗಿಸಿ,
ಪೂಜೆ ಮಾಡುತ್ತೇವಲ್ಲ
ನಮಗೆ
ನಾಚಿಕೆಯಾಗಬೇಕು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.