Tuesday, February 28, 2012

ಮಾತ್ಗವಿತೆ-44

ಕಳೆದುಕೊಂಡದ್ದು ಏನು ಎಂಬುದರ ಸುತ್ತ
ಹತ್ತಾರು ಊಹಾಪೋಹಗಳು !
ಹುಗಿದ ಹೆಣವನ್ನು ಹೊರತೆಗದು
ಮತ್ತೇ ಮತ್ತೇ ಯಾಕೆ ಅಳಬೇಕು ?
ನಾನು ಅಳುವುದಿಲ್ಲ ; ಕೇಳುವುದೂ ಇಲ್ಲ
ಪಾಲಿಗೆ ಬಂದದ್ದು ಪಂಚಾಮೃತವೆಂದು
ಸುಮ್ಮನೆಯೂ ಇರುವುದಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.