Tuesday, February 19, 2013

ಮಾತ್ಗವಿತೆ-116

ಸುಮ್ಮನೇ ಹಾದಿ ಹಿಡಿದು ಹೊರಟಿದ್ದೆ
ಹಾದಿಯಲ್ಲಿ ಒಂದು ಮರ,
ಮರದ ಬುಡದ ಮೇಲಿನ ರೆಂಬೆ-ಕೊಂಬೆ
ಚಿಗುರು, ಹೂವೂ, ಹೀಚುಕಾಯಿ, ಕಾಯಿ, ಹಣ್ಣು ... !
ಇನ್ನೂ ಏನೇನೋ ಕಣ್ಣಿಗೆ ಬಿದ್ದವು.
ನಡುವೆ ಕುಳಿತ ಎರಡು ಹಕ್ಕಿಗಳು
ಸರಸದಲ್ಲಿ ಕೊಸರಾಡುತ್ತಿದ್ದವು !
ನಾನು ದಿಕ್ಕು ಬದಲಿಸಿದೆ ;
ಮತ್ತೊಂದನ್ನ ಅರಸಿ ಹೊರಟೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.