Wednesday, February 06, 2013

ಮಾತ್ಗವಿತೆ-111

ಅದ್ಯಾಕೋ ಗೊತ್ತಿಲ್ಲ ...
ದೇವರಿಗೆ ತೆಗೆದಿಟ್ಟ ಹೂವನ್ನು ನಿನಗೆ ಮುಡಿಸಿದ್ದೆ !
ಮುನಿಸು ಹೆಚ್ಚಾಯಿತೋ ;
ದೇವರು ಮುನಿಯುವುದಿಲ್ಲ ಬಿಡು
ಅದು ಕಲ್ಲು !
ನೀನೂ ಮುನಿದು ದೇವರಂತೆಯೇ
ಕಲ್ಲಾದೆ ಯಾಕೆ ಎಂಬುದೇ ನನಗಿನ್ನೂ ಗೂಢ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.