Thursday, November 14, 2013

ನಾನು-ನೀನು ಮತ್ತು ಕ್ರಾಂತಿ...


ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಬರೆದ ಪಾಡಿನ ಹಾಡು ಹೀಗಿದೆ ;

ಡಾ. ಸಿದ್ರಾಮ ಕಾರಣಿಕ
--------------------------------
ನನ್ನನ್ನೀಗ ಕಾಡಬೇಡ ಗೆಳತಿ
ನಾನೀಗ ಕ್ರಾಂತಿಯ ಬೆನ್ನ ಹತ್ತಿರುವೆ
ಆಕೆಯ ತೋಳ್ತೆಕ್ಕೆಯಲ್ಲಿ  ಸಿಲುಕಿ
ಸುಖದ ಸವಿಯಲ್ಲಿರುವೆ !

ನನ್ನನ್ನೀಗ ಕಾಡಬೇಡ ಗೆಳತಿ
ನಿನ್ನ ನೆನಪು ಮರುಕಳಿಸಿದರೂ
ಕ್ರಾಂತಿಯ ಬಿಸಿಯಪ್ಪುಗೆ
ನರನಾಡಿಗಳಲ್ಲಿ ತುಸು ನೆಮ್ಮದಿಗೆ
ಅನುವಾಗಿ ನಿನ್ನ ಚಿತ್ರ ಅಸ್ಪಷ್ಟವಾಗುತ್ತಿದೆ !

ಗೆಳತಿ, ಕ್ರಾಂತಿಯ ಬಗೆಗಿನ ನಿನ್ನ ಮತ್ಸರ
ಸಮಝಾಯಿಸಿಗೆ ನಿನ್ನ ನಿರುತ್ತರ ಮೌನ
ಅಳು - ಜಗಳ ಅತಿರೇಕಕ್ಕೇರಿದಾಗ
ಓಹ್ ! ನಾನು ಕ್ರಾಂತಿಯನ್ನು ಬಿಡಲಾರೆ ಗೆಳತಿ !

ತೀವ್ರ ಭಾವನೆಗಳ ಬದಿಗೊತ್ತು ; ಕ್ಷಣಕಾಲ
ಕ್ರಾಂತಿಯ ನಡೆಯನ್ನು ನೋಡು ; ಗುರುತಿಸು !
ನಾನು ನಿನಗೆ ಬೇಕು ; ನನಗೆ ಕ್ರಾಂತಿ ಬೇಕು
ಅಬಸೋತಾದರೆ ನೀನೂ ಬೇಕು
ಯೋಚಿಸು ಗೆಳತಿ ಆಯ್ಕೆ ನಿನ್ನದು !

(ಮೋಡ ಕಟ್ಟೇತಿ ಕವನ ಸಂಕಲನದಿಂದ)

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.