Saturday, November 23, 2013

ವಚನ-33

ಬಡತನ ಶಾಪ ಎಂದುಕೊಂಡವರು ಯಾರು ? 
ಪುಟಿ ನೆಗೆದು ಶಾಪವೆಂದುಕೊಂಡವರ ಮುಂದೆ 
ಸೆಟೆದು ನಿಲ್ಲಬೇಕಲ್ಲದೆ ಅಳುವುದು ತರವಲ್ಲ ; 
ತೆಗಿ ತೆಗಿ ನಿನ್ನ ಡಮರುಗದ ನಾದಕ್ಕೆ 
ಆವ ಶಬುದ ಎದುರಾಗಿ ನಿಲುವುದು ?
ಅದಾವ ಶಾಪ ಸಂಗ ಬಯಸಬಲ್ಲದು ?
ಹಂಗೆ ಹೇಳುವ ಹೇಸಿಯೋ ಕಸಿಗೊಂಡಾನು
ಇಲ್ಲವೆ ಕಸಿವಿಸಿಗೊಂಡಾನು 
ಕಾರಣಿಕ ಸಿದ್ಧರಾಮ ತಿಳಿವಿನೊಳಗಲ್ಲದೆ
ಮರೆವಿನವನಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.