Wednesday, November 27, 2013

ವಚನ-34

ಹಾದರದ ಲಾಡಿ ಬಿಗಿದುಕೊಳ್ಳುತ್ತ
ಹಾದಿ ಮ್ಯಾಗಳ ಹಾದರಕ್ಕೆ ಹೇಸಿ ಹೌಹಾರಿ
ಹುಯಿಲಿಡುವ ಹುಚ್ಚಪ್ಪಗಳಿರಾ
ಹಾದಿ-ಬೀದಿ ಬಿಟ್ಟು ನಡುಮನೆಯ ಹಾದರಿಗರ
ಹಸಿ-ಪಿಸಿಗಳ ನೆನಪ ಮಾಡಿಕೊಳ್ಳಿ
ಹೇಳುವಾತನ ಹೇಲುತನಕ್ಕೆ ಕಿವಿಯಾದೊಡೆ 
ಕಾರಣಿಕ ಸಿದ್ಧರಾಮ ಅಲ್ಲಮ-ಅಕ್ಕನಿಗೂ ಹಾದರ ಹುಟ್ಟಿಸಬಲ್ಲರು !
ಹಾರೈಸು ನಿತ್ಯದ ನಿಜ ಬದುಕಿಗೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.