Thursday, July 11, 2013

ಮಾತ್ಗವಿತೆ-137

ಅಯ್ಯೋ ! ಯಾಕೆ ಹೀಗಾಯಿತು ?
ಗುಲಾಮಗಿರಿ ಬಿಡಿಸಿಕೊಂಡವರೇ
ಗುಲಾಮರನ್ನು ಖರೀದಿಸುತ್ತಿದ್ದಾರೆ !
ಮಾತಿಲ್ಲದ ಮೂಕರಾದವರು ಬಾಯಿ ಬಂದಾಗ
ಮತ್ತೇ ಮೂಕರಂತೆ ಇರಬಯಸುವ ಕಾರಣವೇನೋ ?
ಇನ್ನೂ ಮೂಕವಾಗಿರುವ ಮಂದಿಗಿ ಮಾತಾಗಬಾರದೇ ?
ಗುಲಾಮಗಿರಿ ಕೆಟ್ಟದ್ದು ಸ್ವಾಮಿ ;
ಮಾನಸಿಕ ಗುಲಾಮಗಿರಿ ಇನ್ನೂ ಕೆಟ್ಟದ್ದು.. !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.