Tuesday, October 16, 2012

ಶಂಖದಿಂದ ಬಂದರೆ ಮಾತ್ರ ತೀರ್ಥ !



ಸಾಹಿತ್ಯದ ವಿಮರ್ಶೆಯ ಬಗ್ಗೆ ನಾನು ಪದೇ ಪದೇ ಅಂದ್ರೆ ಬಹಳಷ್ಟು ಸಲ ಹೊಸದಾಗಿ ಬರೆಯುವ ನನ್ನ ವಿದ್ಯಾರ್ಥಿಗಳಾದಿಯಾಗಿ ಎಲ್ಲರಿಗೂ ಹೇಳುವ ಸಂಗತಿಯನ್ನು ನಿಮ್ಮ ಮುಂದೆ ಇಡುತ್ತಿರುವೆ. ಒಂದು ನಾಲ್ಕು ಸಾಲಿನ ಕವಿತೆಯನ್ನು ಕೊಟ್ಟು ಆ ಬಗ್ಗೆ ಬರೆಯುತ್ತೇನೆ. ಆ ಕವಿತೆ ಹೀಗೆಇದೆ ;

ಆತ ಅತ್ತ ಕಡೆಯಿಂದ ಬಂದ
ಆಕೆ ಇತ್ತ ಕಡೆಯಿಂದ ಬಂದಳು
ನಡುವೆ ಒಂದು ವೃತ್ತ
ಇಬ್ಬರೂ ಸಂಧಿಸುವಲ್ಲಿ
ಆತ ಬಲಕ್ಕೆ ಹೊರಳಿದ
ಆಕೆ ಎಡಕ್ಕೆ ಹೊರಳಿದಳು !

ಹೀಗೆ ಬರೆದು ಯಾರಾದರೂ ವಿದ್ವಾಂಸರು, ಬರಹಗಾರರು ಎಂದುಕೊಂಡವರ ಬಳಿಗೆ ನೀವು 'ಸರ್, ಇದು ನಾನು ಬರೆದ ಕವಿತೆ' ಎಂದುಕೊಂಡು ಹೋದಿರೋ ಮುಗಿಯಿತು ...  ಅವರು ಬುದ್ಧಿವಾದ ಹೇಳುತ್ತಾರೆ. ಇದು ಕವಿತೆಯೇ ಅಲ್ಲ ಎನ್ನುವಂತೆ ಮಾತಾಡುತ್ತಾರೆ ! ಇನ್ನೊಂದಿಷ್ಟು ಗಂಭೀರವಾಗಿ ಬರೆಯುವಂತೆ ಪುಕ್ಕಟೆ ಸಲಹೆಯನ್ನೂ ನೀಡುತ್ತಾರೆ !

ಅದೇ ನೀವು ಇದೇ ಕವಿತೆಯನ್ನು ತೆಗೆದುಕೊಂಡು ಯಾವುದೋ ಒಬ್ಬ ಹೆಸರಾಂತ ಕವಿಯ ಹೆಸರನ್ನು  ಬರೆದು 'ಇದು ಸರ್ ಇಂಥವರು ಬರೆದ ಕವಿತೆ' ಅನ್ನಿ. ಆವಾಗ ಸುರುವಾಗುತ್ತೆ ನೋಡಿ ಅವರ ವಿಮರ್ಶಕ ಬುದ್ಧಿ ! ಈ ಕವಿತೆಯನ್ನು ಅವರು ಹೊಗಳುತ್ತಾರೆ. ಪ್ರಕೃತಿ-ಪುರುಷ ಎಂದು ಮೊದಲಾಗಿ ಮಾತನಾಡುತ್ತಾರೆ. ಕೆಲವೊಬ್ಬರು ಅದಕ್ಕೆ ಆಧ್ಯಾತ್ಮಿಕ ಹೋಲಿಕೆಯನ್ನೂ ನೀಡುತ್ತಾರೆ !

ಹಾಗಾದರೆ ಶಂಖದಿಂದ ಬಂದದ್ದು ಮಾತ್ರ ತೀರ್ಥವೇ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.