Monday, October 15, 2012

ನನ್ನ ಅಕ್ಷರ ಮಾಯೆ ಪದ್ಯದ ಸಾಲುಗಳು:

- ಅರುಣ ಜೋಳದಕೂಡ್ಲಗಿ
 
ಬಿಳಿ ಹಾಳೆಯಲ್ಲಿ
ಅವಳೇ ಬರೆದ ಸಾಲುಗಳ ಮೇಲೆ
ಪುಟ್ಟ ಹೆಜ್ಜೆ ಇಟ್ಟು ನಡೆಯುತ್ತಿದ್ದಾಳೆ !
ಒಂದಕ್ಷರ ಕದಲಿದರೂ
ಅವಳು ಬೀಳುವುದು ಪ್ರಪಾತಕ್ಕೆ !
ಪ್ರತಿ ಅಕ್ಷರದ ಪಾದಕ್ಕೂ
ನಮಸ್ಕರಿಸಿ ಹೇಳಿದ್ದೇನೆ
ಅವಳ ಪಾದ ಚಲಿಸುವಷ್ಟು ಹೊತ್ತು
ಭಾರ ಹೊರುವ ಶಕ್ತಿ ನೀಡಲು
ನಿಮ್ಮ ತಾಯಂದಿರ ನೆನೆಯಿರಿ ಎಂದು !
ಈಗ ನನ್ನೆಸರಿನ ಮೇಲೆ ಪಾದ ಊರಿದ್ದಾಳೆ
ಮೈ ಬೆವರುತ್ತಿದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.