Monday, October 15, 2012

ಇಂಟರ್ ವ್ಯೂಗೆ ಬಂದ ಯುವಕರಿಗೆ...


ತಮಿಳು: ಎಂ.ರಾಮಲಿಂಗಂ
ಕನ್ನಡಕ್ಕೆ: ಓ.ಎಲ್. ನಾಗಭೂಷಣ ಸ್ವಾಮಿ.


ಓ ನನ್ನ ಪ್ರಿಯ ಗೆಳೆಯರೆ
ಪರಿತಾಪ ಪಡುವ ಜೀವಿಗಳೆ !

ಕನಸುಗಳ ಭಾರ ಹೊತ್ತ ನಿಮ್ಮ ಕೊರಳನ್ನು

ಯಾಕೆ ಮುಂದೊಡ್ಡಿದ್ದೀರಿ ?

ಈ ಸಂಯುಕ್ತೆ

ನಮಗೆ ಯಾರಿಗೂ

ಮಾಲೆ ಹಾಕುವವಳಲ್ಲ.
!

ಒಬ್ಬ ಪೃಥ್ವೀರಾಜ

ಈಗಾಗಲೆ ಅಡಗಿ ನಿಂತಿದ್ದಾನೆ
ಇನ್ ಪ್ಲುಯೆನ್ಸಿನ ಶಿಲಾ ವಿಗ್ರಹದ ಹಿಂದೆ.

ಬನ್ನಿ,

ಈ ಹಗಲು ನಾಟಕಕ್ಕೆ
ಸಾಕ್ಷಿಗಳಾಗಿರುವ ಬದಲು
ಮರೆಯೋಣ ನಮ್ಮೆಲ್ಲಾ ದುಃಖ
ಗಾಂಜಾ ಸೇದಿ

ಅಥವಾ

ಸ್ಪೋಟಿಸೋಣ ಈ ಶಿಲಾ ಪರ್ವತಗಳನ್ನು
ಎಸೆದು ಒಂದು ಬಾಂಬು !

(ಆತ್ಮೀಯ ಡಾ. ಅರುಣ ಜೋಳದಕೂಡ್ಲಗಿ ಅವರು ಕಳುಹಿಸಿದ ಕವಿತೆ)

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.