Wednesday, December 04, 2013

ಬರಹಗಾರನ ಸ್ವಾಭಿಮಾನಕ್ಕೆ ಪೆಟ್ಟು !

ಡಾ. ಸಿದ್ರಾಮ ಕಾರಣಿಕ
ನಾನು ಪುಸ್ತಕಗಳನ್ನು ರಚಿಸುವಾಗ ಅಥವಾ ಅನುವಾದಿಸುವಾಗ ಮೊದಲು ಕಚ್ಚಾ ಬರವಣಿಗೆ ಮಾಡುತ್ತೇನೆ. ಮೊದಲ ಬರವಣಿಗೆಗೆ ನಾನು ಕೆಲವು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತೇನೆ. ಒಂದು ಪುಟಕ್ಕೆ ಇಂತಿಷ್ಟು ಎಂದು ಹಣವನ್ನೂ ನೀಡುತ್ತೇನೆ. ಆನಂತರ ಏಕಾಂತದಲ್ಲಿ ನಾನು ಪಕ್ಕಾ ಬರವಣಿಗೆಗೆ ತೊಡಗುತ್ತೇನೆ. ಆನಂತರ ಡಿ.ಟಿ.ಪಿ, ತಿದ್ದುಪಡಿ ಎಲ್ಲ ಮಾಡುತ್ತೇನೆ. ಸಾಯಿ ಕಾದಂಬರಿಯನ್ನು ಅನುವಾದ ಮಾಡುವಂತೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮರಾಠಿ ಪ್ರಾಧ್ಯಾಪಕರಾದ ಡಾ. ವಿನೋದ ಗಾಯಕವಾಡರು ಬಹಳಷ್ಟು ಸಲ ಒತ್ತಾಯಿಸಿದಾಗ ಕೂಡ ನಾನು ಅವರಿಗೂ ಇದನ್ನು ಹೇಳಿದ್ದೆ. ಎಂಟುನೂರು ಪುಟಗಳ ಬರವಣಿಗೆಗೆ ಎಂಟು ಸಾವಿರ ಕೊಡಬೇಕಾಗುತ್ತದೆ ಎಂದೆ. ಅವರು ಒಟ್ಟು ಹತ್ತು ಸಾವಿರು ರುಪಾಯಿ ನೀಡಿದರು. ಎರಡು ಸಾವಿರು ಹೆಚ್ಚಾಯಿತು ; ಕೃತಿ ಪ್ರಕಟವಾದ ಮೇಲೆ ಸಂಭಾವನೆ (ರಾಯಲ್ಟಿ) ಬಂದಾಗ ಅದನ್ನು ಮರಳಿಸುತ್ತೇನೆ ಎಂದು ನಾನು ಅವರಿಗೆ ಎರಡ್ಮೂರು ಸಲ ಹೇಳಿದ್ದೆ. ಆದರೆ ಸಂಭಾವನೆ ಬಿಡಿ ; ನಾನೇ ಅನುವಾದಿಸಿದ ನನ್ನದೇ ಕೃತಿಯನ್ನೂ ನಾನು ಮೇಲಿಂದ ಮೇಲೆ ನಾನು ಕೇಳಿದಾಗಲೂ ಪ್ರಕಾಶಕರು ಕೇವಲ ಒಂದೇ ಪ್ರತಿ ಕಳುಹಿಸಿ ಇಡೀ ಬರಹಗಾರನ ಸ್ವಾಭಿಮಾನಕ್ಕೆ ಪೆಟ್ಟು ನೀಡಿದರು. ಚರ್ಚೆಯ ಮೂಲಕ ಬಗೆ ಹರಿಸಿಕೊಳ್ಳಬೇಕು ಎಂದುಕೊಂಡಾಗಲೂ ಮೂಲ ಲೇಖಕರು ಮತ್ತು ಪ್ರಕಾಶಕರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನ್ಯಾಯಾಲಯದ ಮೂಲಕ ನ್ಯಾಯ ಕೇಳಲೇಬೇಕಾಗುತ್ತದೆ. ಧಾರವಾಡದ ಹೈಕೋರ್ಟಿನಲ್ಲಿ ಕೇಸು ದಾಖಲು ಮಾಡುವ ವಿಚಾರದಲ್ಲಿರುವೆ. ತಿಳಿದವರು, ನ್ಯಾಯವಾದಿಗಳು ಬಗ್ಗೆ ನನಗೆ ಸಲಹೆ ನೀಡಬೇಕು ಎಂದು ಮೂಲಕ ಕೇಳಿಕೊಳ್ಳುತ್ತಿರುವೆ.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.