Friday, January 30, 2015

ಮಾತ್ಗವಿತೆ-178

ಅದು ಯಾವುದು ಕಣ್ಣೋ
ಕಾಡಿನ ನಡುವೆ ಅರಳಿದ
ಕೆರೆಯ ಕಣ್ಣೋ
ಕಣ್ಣುಗಳ ಆಸೆಗೆ ಕಣ್ಣಿಲ್ಲದವನಂತೆ
ಮಣ್ಣು ಸೇರುವ ಪರಿಯಲ್ಲಿ ಹಲಬುವಿಕೆ !
ನಿನ್ನ ಒಳಗಿನ ಕಣ್ಣು ತೆರೆ
ರೇತು-ರಜಸ್ಸುಗಳ ಮಹಾಪೂರ ಕನಸಿನಲ್ಲಿದೆ
ಅಕ್ಷಿ ಅಕ್ಷಿ ಎಂದು ಅರಸು
ಮತಲಬಿಗಳ ಹಿಂಡೇ ಕಾಣುತ್ತದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.