Thursday, September 18, 2014

ವಚನ-39

ಹುಟ್ಟಿನ ಮೂಲ ಅರಿಯದವ
ತಾಯಿ ಪ್ರೀತಿ ಎಂತು ಅರಿತಾನು ?
ಗುಡಿಸಲ ತಡಿಕೆ ದಾಟಿ
ಮಹಲು ಸೇರಿದವಗೆ ಮೂಲ ನೆನಪಿರಬೇಕಲ್ಲವೆ ?
ಮಾನ ಮರ್ಯಾದೆ ಉಳಿಸಿಕೊಂಡು
ಅಸ್ಮಿತೆಯನ್ನೇ ಕಳೆದುಕೊಂಡವರ  ಏನೆಂಬೆ ?
ಕಾರಣಿಕ ಸಿದ್ಧರಾಮ ವಾಸನೆಗೆ ಕೊಟ್ಟ ಹೂವು
ಹೂಸಿನ ಜಾಗಕ್ಕೆ ಇಟ್ಟುಕೊಳ್ಳುವವರ
ಕಾಸಿನಾಸೆ ಕಂಡು ಕಸಿವಿಸಿಗೊಂಡ !



No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.