Wednesday, August 27, 2014

ಮಾತ್ಗವಿತೆ-173

ಕಾಲಕ್ಕೆ ಕಾಯು ಎಂದವರೇ
ಕಾಲನಾಗಿ ಇಲ್ಲವೇ ಕಾಲನಾಗಿ
ಹಣ ಮಾಡುತ್ತ ಹೆಣ ಮಾಡಿದರೆ
ನಾಲಿಗೆ ಕಳೆದುಕೊಂಡ ಮೌನಗಳು
ಮಾತ ಬಾರದೆಂದೆಂದೂ ಎಂದು
ಹರುಷ ಪಡುವ ಅವಶ್ಯಕತೆಯಿಲ್ಲ !
ದೇಹವ ದಂಡಿಸಿದವರ ; ಒಳಗ ಇರಿದವರ
ನೊಸಲ ಮೆಟ್ಟಿ, ರಸಾತಳಕ್ಕೆ ಅಟ್ಟುವಷ್ಟು
ಅಡಿಸಿದ ಅಳಕವಿದೆ ; ಬೆಳಕು ಇದೆ !
ನದಿ ದಾಟಲು ಈಸು ಬರಬೇಕು ಅಂತಲ್ಲ
ನಾವೆ ಇದ್ದರೂ ಸಾಕಲ್ಲವೇ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.