Tuesday, March 11, 2014

ವಚನ-37

ಬಣ್ಣಕ್ಕೆ ಬಗ್ಗಿದವರು ಕೆಲರು
ಬೆಣ್ಣೆಗೆ ತಗ್ಗಿದವರು ಕೆಲರು
ಬಣ್ಣ-ಬೆಣ್ಣೆ ಗರಿಮೆಯೂ ಅಲ್ಲ ; ಹಿರಿಮೆಯೂ ಅಲ್ಲ !
ಕಣ್ಣ ಕಾಣದೆ ಇರುವುದ ಕಾಂಬವರು
ರೂಹುಗಳ ಕಡೆಗಾಕಿ ನೆಚ್ಚಿಕೊಂಬುವರು
ಮಜ್ಜಿಗೆ ಸೇರಿದ ನುಚ್ಚು ; ಕಾರಣಿಕ ಸಿದ್ಧರಾಮ
ಅಚ್ಚು ಬೆಲ್ಲವ ಬಲ್ಲವರಾಗಬೇಕು ಹೊರತು
ಗಲ್ಲಕ್ಕೆ ಕೈಯಾಗುವುದು ಬರೀ ಗುಲ್ಲು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.