Monday, October 06, 2014

ವಚನ-40

ಅದೆಂಥ ಗಾಳಿ !
ತೂರಿಕೊಂಡವರೂ
ಮಾರಿಕೊಂಡವರೂ
ನಡುವೆ ಆಣೆ ಲೆಕ್ಕ ಇಟ್ಟುಕೊಂಡವರೂ
ಸುಗ್ಗಿ ಮಾಡುವಾಗಲೇ
ಬೀಸಿತಲ್ಲಾ !
ತಂಗಾಳಿ ಎನಿಸಿದ್ದು ಸುಳಿಗಾಳಿ, 
ಬಿರುಗಾಳಿ, ಎದುರ್ಗಾಳಿಯಾಗಿ
ಬಗ್ಗು ಬಡಿಯುತ್ತಿದೆಯಲ್ಲ !
ಸಿಡಿಲಾಗಿ ಸಿಡಿದು ಜೋರು ಮಳೆಯಾದರೆ
ಬೆಳೆದದ್ದು ಮುಗ್ಗು ಹಿಡಿಯದಿರದೇ ?
ಕಾರಣಿಕ ಸಿದ್ಧರಾಮ ಕಾಲಕ್ಕೆ ಕಾಲನ ಭಯ ಇಲ್ಲ !  

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.