Wednesday, March 05, 2014

ರಾಮ-ರಹೀಮರ ಅವಶ್ಯಕತೆ ಇಲ್ಲ !

 ಡಾ. ಸಿದ್ರಾಮ ಕಾರಣಿಕ

ನನಗೆ ರಾಮ ಬೇಕಿಲ್ಲ ;
ಆತನ ಹೆಸರಿನಲ್ಲಿ ಹರಾಮಿ ಬದುಕೂ ಬೇಕಿಲ್ಲ !
ರಹೀಮನೂ ಬೇಕಿಲ್ಲ ನನಗೆ
ಆತನ ಹೆಸರಿನಲ್ಲಿ ಬೇನಾಮಿ ಬದುಕೂ ಬೇಕಿಲ್ಲ !

ಮನುಷ್ಯ, ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ
ಎಲ್ಲೋ ಮನದ ಮೂಲೆಯಲ್ಲಿ ಅಡಗಿ ಕುಳಿತಿರೋ
ಮಾನವೀಯತೆಯ ಮನುಷ್ಯ ಬೇಕಾಗಿದ್ದಾನೆ !

ಬೇಕಾದರೆ ಅವನಿಗೆ ಗುಡಿ ಕಟ್ಟಬೇಕು
ಎಂಬ ಆಸೆ ನನಗೆ !
ಗುಡಿ ಕಟ್ಟದೇ ಗುಡುಗಬೇಕೆಂಬ ತಿನಿಸು !
ಏನೂ ಆಗದಿದ್ದರೂ ರಾಮ-ರಹೀಮರ ಹೆಸರಲ್ಲಿ
ಹರಾಮಕೋರಿತನ ಮಾಡಬಾರದು ಎಂಬ ಮೈ-ಮನ !
ಹಜಾಮತಿಗೆ ಹಲಾಲಿತನದ ಹೆಸರು ಬೇಕಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.